ಮೋದಿಜಿ, ಹೌ ಇಸ್ ದಿ ಜೋಶ? ಎಂದು ಭದ್ರತಾ ಲೋಪದ ಕುರಿತು ದೇಶದ ಪ್ರಧಾನಿಗೆ ಯುವ ಕಾಂಗ್ರೆಸ್ ರಾಷ್ಟೀಯಾಧ್ಯಕ್ಷರ ಪ್ರಶ್ನೆ | ಜನತಾ ನ್ಯೂಸ್
ನವದೆಹಲಿ : ನಿನ್ನೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ಪಂಜಾಬ್ನ ಫ್ಲೈಓವರ್ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು ಎಂಬ ಸುದ್ದಿ ವಿಶ್ವಾದ್ಯಂತ ಬ್ರೇಕಿಂಗ್ ನ್ಯೂಸ್ ಆಗಿದ್ದು ದೇಶ ಸಾಕಷ್ಟು ಅವಮಾನ ಎದುರಿಸುವಂತಾಗಿದೆ.
ಕಾಂಗ್ರೆಸ್ ಸರ್ಕಾರವಿರುವ ಪಂಜಾಬ್ ರಾಜ್ಯದಲ್ಲಿ ನಡೆದಿರುವ ಈ ಘಟನೆಯನ್ನು ಖಂಡಿಸುವ ಬದಲು ಕಾಂಗ್ರೆಸ್ ನಾಯಕರು ತದ್ವಿರುದ್ಧವಾಗಿ ಪ್ರತಿಕ್ರಿಯಿಸಿದ್ದಾರೆ. ಭಾರತೀಯ ಯುವ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್.ಬಿ.ವಿ ಅವರು ಪಂಜಾಬ್ ಹ್ಯಾಶ್ ಟ್ಯಾಗ್ ಹಾಕಿ ಬರೆದಿದ್ದಾರೆ, ಮೋದಿಜಿ, ಹೌ ಇಸ್ ದಿ ಜೋಶ?(ಈಗ ಹೇಗಿದೆ ಉತ್ಸಾಹ?), ಎಂದು ವ್ಯಂಗ್ಯವಾಗಿ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಇದರಿಂದ ಕಾಂಗ್ರೆಸ್ ಉದ್ದೇಶ ಪೂರ್ವಕವಾಗಿ ನಡೆಸಿದ ಪಿತೂರಿ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು, ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಪ್ರಧಾನಮಂತ್ರಿಯವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲು ಮುಖ್ಯಮಂತ್ರಿ ಚರಣಜಿತ್ ಎಸ್. ಚನ್ನಿ ಗೈರಾಗಿದ್ದರು. ರಾಜ್ಯ ಡಿಜಿಪಿ ಅವರೂ ಕೂಡ ಗೈರಾಗಿದ್ದರು ಹಾಗೂ ಫ್ಲೈ ಓವರ್ ಮೇಲೆ ಪ್ರಧಾನಿ ಅವರೊಂದಿಗೆ ಅವರ ಬೆಂಗಾವಲು ಪಡೆ ಸಿಲುಕಿದ ಸಂದರ್ಭ ಮುಖ್ಯಮಂತ್ರಿ ಕಚೇರಿ ಹಾಗೂ ಡಿಜಿಪಿ ಗೆ ಮಾಡಿದ ಕರೆಯನ್ನು ಯಾರೂ ಸ್ವಿಕರಿಸದೇ ಇರುವುದು, ಇದೊಂದು ದೊಡ್ಡ ಷಡ್ಯಂತ್ರವಾಗಿತ್ತು, ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಟ್ವೀಟ್ ಮಾಡಿ, ಅವರ ಮಾರ್ಗವನ್ನು ಮುಚ್ಚಲಾಗಿತು, ಪ್ರಧಾನಿ ಮೋದಿ 20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿಕೊಂಡರು.
ಪಂಜಾಬ್ ಸಿಎಂ ಚನ್ನಿ ದೂರವಾಣಿ ಕರೆ ಸ್ವಿಕರಿಸಲು ಮತ್ತು ಸಮಸ್ಯೆಯನ್ನು ತಿಳಿಯಲು ನಿರಾಕರಿಸಿದರು.
ಪಂಜಾಬ್ ಪೊಲೀಸರಿಗೆ ಮಾತ್ರ ಪ್ರಧಾನಿ ಮಾರ್ಗ ಗೊತ್ತಿತ್ತು.
ಇತ್ತೀಚಿನ ವರ್ಷಗಳಲ್ಲಿ ಯಾವುದೇ ಭಾರತೀಯ ಪ್ರಧಾನಿಯ ಭದ್ರತೆಯಲ್ಲಿ ಇದು ಅತಿದೊಡ್ಡ ಲೋಪವಾಗಿದೆ.
ಏನು ಯೋಜಿಸಲಾಗಿತ್ತು??, ಎಂದು ಪ್ರಶ್ನಿಸಿದ್ದಾರೆ.